
ನಮ್ಮ ಬಗ್ಗೆ
ಸುಮಾರು ಹತ್ತು ವರ್ಷಗಳಿಂದ ಕರ್ನಾಟಕದಾದ್ಯಂತ ರೇಕಿ,ಯೋಗ,ಕ್ರಿಸ್ಟಲ್ ಹೀಲಿಂಗ,ಸೂಪರ್ ಬ್ರೇನ್ ಯೋಗ ತರಬೇತಿ ಶಿಬಿರಗಳನ್ನು ನಡೆಸುತ್ತಿದ್ದೇವೆ.
ಸಾವಿರಾರು ಜನರು ನಮ್ಮ ಯೋಗ ತರಬೇತಿಯ ಲಾಭಗಳನ್ನು ಪಡೆದಿದ್ದಾರೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಣದಲ್ಲಿ ಆಸಕ್ತಿಯನ್ನು ಹೆಚ್ಚು ಮಾಡಿಕೊಳ್ಳಲು,ಏಕಾಗ್ರತೆ, ನೆನಪಿನ ಶಕ್ತಿ,ಸಕಾರಾತ್ಮಕ ಆಲೋಚನೆ,ಆತ್ಮ ವಿಶ್ವಾಸ ಇತ್ಯಾದಿ ಗುಣ ವಿಶೇಷತೆಗಳನ್ನು ಹೆಚ್ಚಿಸಿಕೊಂಡಿದ್ದಾರೆ.
ಶ್ರೀ ಬಸವರಾಜ ಸಂ ಹೊಸಮನಿ(ಹೊಸಬ)
ಬೆಂಗಳೂರಿನ ಗಾಂಧೀ ಭವನದಲ್ಲಿರುವ ಮಹಾತ್ಮಾ ಗಾಂಧೀ ಪ್ರಾಕೃತಿಕ ಚಿಕಿತ್ಸಾಕೇಂದ್ರದಲ್ಲಿ ನಿಸರ್ಗ ಚಿಕಿತ್ಸಕರಾಗಿ 3 ವರ್ಷಗಳ ಸೇವೆ ಸಲ್ಲಿಸಿದ್ದಾರೆ.ಅಲ್ಲಿರುವಾಗ ಪ್ರಸಿದ್ಧ ದೂರದರ್ಶನ ವಾಹಿನಿಯಾದ ಶ್ರೀ ಶಂಕರದಲ್ಲಿ 13 ಎಪಿಸೋಡ್ಗಳನ್ನು ನೀಡಿರುತ್ತಾರೆ. ರೇಕಿ,ಪ್ರಾಣಿಕ್ ಹೀಲಿಂಗ, ಹಿಪ್ನಾಟಿಸಂ, ಪೆಂಡುಲಮ್ ಹೀಲಿಂಗ, ಅಕ್ಯುಪ್ರೆಶರ್, ಪಿರಮಿಡ್ ಹೀಲಿಂಗ, ವಾಸ್ತು ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ಸುಮಾರು ಹತ್ತು ವರ್ಷಗಳಿಂದ ಅಂದರೆ ತಮ್ಮ 18 ನೇ ವಯಸ್ಸಿನಿಂದ ಶಿಬಿರಗಳನ್ನು ನಡೆಸುತ್ತಿದ್ದಾರೆ.
ಶಾಲಾ-ಕಾಲೇಜು ಮಕ್ಕಳಿಗೆ ಆತ್ಮವಿಶ್ವಾಸ,ನೆನಪಿನ ಶಕ್ತಿ,ಏಕಾಗ್ರತೆ ಮತ್ತು ಸಕಾರಾತ್ಮಕ ಆಲೋಚನೆಗಳ ಬಗ್ಗೆ ಹಲವಾರು ಉಚಿತ ಕಾರ್ಯಾಗಾರಗಳನ್ನು ನಡೆಸಿ ಕಒಟ್ಟಿರುತ್ತಾರೆ.ಶ್ರೀಕಿರಣ-1 ಎಂಬ ಉತ್ತಮ ಪುಸ್ತಕದ ಲೇಖಕರು ಇವರಾಗಿದ್ದು,ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗಾಗಿ ಇವರು ಕಾಮಧೇನು ಎಜುಕೇಶನ್ ಮತ್ತು ವೆಲ್ತ ಎಂಬ ಉಚಿತ ಸಕಾರಾತ್ಮಕ ವಿಡಿಯೊ ಮತ್ತು ಆಡಿಯೊದ ಲಾಭವನ್ನು ಸಾವಿರಾರು ಜನರು ಪಡೆದಿದ್ದಾರೆ.
ಭೀಮಸೇನ್ ಯಲಗೂರ MCA
ಟ್ರೆಡಿಷನಲ್ ರೇಕಿಮಾಸ್ಟರ್ ಆಗಿದ್ದು ಇವರು ಸುಮಾರು 4 ವರ್ಷಗಳಿಂದ ರೇಕಿ,ಪ್ರಾಣಿಕ್ ಹೀಲಿಂಗ ,ಅಗ್ನಿಹೋತ್ರ ಮತ್ತು ಹೋಮ ಚಿಕಿತ್ಸೆಯ ಅಭ್ಯಾಸ ಮಾಡುತ್ತಿದ್ದಾರೆ.
ಧ್ಯಾನ ,ಸೂಪರ್ ಬ್ರೇನ್ನ ಮತ್ತು ಮಿಡ್ ಬ್ರೇನ್ ತರಬೇತುದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಆನಂದ ವಾಯ್ MA,Bed.
ಟ್ರೆಡಿಷನಲ್ ರೇಕಿ ಮಾಸ್ಟರ್ ಆಗಿದ್ದು,ಇವರು ಧ್ಯಾನ, ಸೂಪರ್ ಬ್ರೇನ್ ,ಪೆಂಡ್ಯೂಲಮ್ ಮತ್ತು ಸುಪ್ತ ಸಂದೇಶಗಳ ತರಬೆತುದಾರರಾಗಿ ಸುಮಾರು 5 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ.
Our trainers are under the agreement so they are restricted to teach these things without written statement of AIM administrator.If they teach these things, both the trainer and the holder are claimed for under copy protect act.
ಬಾಲಯೋಗಿ ಅಭಿಯಾನ
ಯೋಗ ಚೇತನ ಪರೀಕ್ಷೆ:
ಪ್ರತಿಯೊಬ್ಬರಿಗೂ ಅತ್ಯವಶ್ಯಕವಾಗಿ ಬೇಕಾದ್ದು ಆರೋಗ್ಯ ಮತ್ತು ಮನಸ್ಸಿನ ಶಾಂತಿ.ಇವೆರಡನ್ನು ಯೋಗದ ಸಾಧನೆಯಿಂದ ಸುಲಭವಾಗಿ ಪಡೆಯಬಹುದು.ಆರೋಗ್ಯ ಮತ್ತು ಮನಸ್ಸಿನ ಶಾಂತಿ ಇದ್ದಾಗವ್ಯಕ್ತಿಯ ಮನಸ್ಸು ಸಂತೋಷದಿಂದ ತುಂಬಿರುತ್ತದೆ.ಇದರಿಂದ ಸಕಾರಾತ್ಮಕ ಆಲೋಚನೆಗಳು ಹೆಚ್ಚುತ್ತವೆ.ನೆನಪಿನ ಶಕ್ತಿ ಮತ್ತು ಏಕಾಗ್ರತೆ ಹೆಚ್ಚಿ ತಾನು ಮಾಡುವ ಕೆಲಸದಲ್ಲಿ ಉತ್ತಮ ಸಾಧನೆಗಳನ್ನು ಮಾಡುತ್ತಾನೆ.ಜೀವನದಲ್ಲಿ ಯಶಸ್ಸನ್ನು ಕಾಣುತ್ತಾನೆ.
ಬೀಜದಂತೆ ವೃಕ್ಷ,ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ನಮ್ಮ ಮಕ್ಕಳು ಯಾವ ರೀತಿಯಲ್ಲಿ ಇರುತ್ತಾರೊ, ಬೆಳೆಯುತ್ತಾರೊ, ಅದೇ ನಮ್ಮ ಸಮಾಜದ ಭವಿಷ್ಯವಾಗಿ ರೂಪುಗೊಳ್ಳುತ್ತದೆ.ಏಕೆಂದರೆ "ಇಂದಿನ ಮಕ್ಕಳೇ ನಾಳಿನ ಪ್ರಜೆಗಳು", ಈ ಮಕ್ಕಳಲ್ಲಿ ಕೆಲವರು ಜನನಾಯಕರಾಗುತ್ತಾರೆ,ಶಿಕ್ಷಕರಾಗುತ್ತಾರೆ.ಮತ್ತೆ ಕೆಲವರು ಪೋಲಿಸ್, ಐಎಎಸ್, ಕೆಎಎಸ್ ,ಇಂಜನೀಯರ್, ವೈದ್ಯ,ರೈತ ಹೀಗೆ ಎಲ್ಲಾ ವರ್ಗಗಳಲ್ಲಿ ತಮ್ಮ ಪ್ರಭಾವವನ್ನು ಬೀರುತ್ತಾರೆ.ಅಲ್ಲಿ ಅವರ ಗುಣ ವಿಶೇಷಗಳಿಂದ ಬದಲಾವಣೆಗಳನ್ನು ತರುತ್ತಾರೆ.
ಆದ್ದರಿಂದ ಮಕ್ಕಳಿಗೆ ಅವರ ಶಾಲಾ ಶಿಕ್ಷಣದ ಜೊತೆಗೆ ಯೋಗ,ಸಕಾರಾತ್ಮಕ ಆಲೋಚನೆ ಮತ್ತು ಪರಿಸರ ಸಂರಕ್ಷಣೆ ಇತ್ಯಾದಿಗಳ ಬಗ್ಗೆ ಸೂಕ್ತ ಶಿಕ್ಷಣ ನೀಡಿ ಭವಿಷ್ಯವನ್ನು ಸಧೃಢಗೊಳಿಸಲು ಬಾಲಯೋಗಿ ಅಭಿಯಾನವನ್ನು ಆರಂಭಿಸಲಾಗಿದೆ.
ಇಲ್ಲಿ ಮಕ್ಕಳಿಗೆ ಯೋಗ,ಸಕಾರಾತ್ಮಕ ಆಲೋಚನೆ ಮತ್ತು ಪರಿಸರ ಸಂರಕ್ಷಣೆ ಕುರಿತು ಪರೀಕ್ಷೆಯನ್ನು ನಡೆಸಲಾಗುವುದು.ಮತ್ತು ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಲು ಪ್ರಥಮ,ದ್ವಿತಿಯ ಮತ್ತು ತೃತಿಯ ರ್ಯಾಂಕ ಪಡೆದ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಅಥವಾ ಪ್ರೋತ್ಸಾಹ ಧನವನ್ನು ನೀಡಲಾಗುವುದು.ಆಯ್ದ ಕೆಲವು ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನಗಳನ್ನು ನೀಡಲಾಗುವುದು.ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಗುವುದು.ಪ್ರಸ್ತುತ 4 ನೇ ತರಗತಿಯಿಂದ 10 ನೇ ತರಗತಿಯ ವರೆಗಿನ ವಿದ್ಯಾರ್ಥಿಗಳಿಗೆ ಈ ಪರೀಕ್ಷೆಯನ್ನು ನಡೆಸಲಾಗುವುದು.
ಮೊದಲನೆ ಪರೀಕ್ಷೆ "ಯೋಗ ಕಿರಣ"
ದ್ವಿತಿಯ ಪರೀಕ್ಷೆ "ಯೋಗ ಜ್ಯೋತಿ"
ಮೂರನೆ ಪರೀಕ್ಷೆ "ಯೋಗ ಚೇತನ"
ಸಲಹೆ ಮತ್ತು ಸೂಚನೆಗಳು
ವಿದ್ಯಾರ್ಥಿಗಳು ತಮ್ಮ 2 ಸ್ಟಾಂಪ ಸೈಜ್ ಪೋಟೊವಿನೊಂದಿಗೆ ,ಗುರುತಿನ ಪತ್ರ ನೀಡಬೇಕು ಮತ್ತು ಪ್ರವೇಶ ಪತ್ರವನ್ನು ಭರ್ತಿ ಮಾಡಿಕೊಡಬೇಕು.
ಪರೀಕ್ಷಾ ಶುಲ್ಕ 100/- ರೂಪಾಯಿಯನ್ನು ನಮ್ಮ ಪ್ರತಿನಿಧಿಗಳ ಕೈಯಲ್ಲಿ ಕೊಟ್ಟು ರಶೀದಿ ಪಡೆಯಬೇಕು
ಇಲ್ಲವೇ
ಆನ್ ಲೈನ್ ನಲ್ಲಿ ಪ್ರವೇಶಪತ್ರ ತುಂಬಿ ಅಲ್ಲಿ ನೀಡಿರುವ ಬ್ಯಾಂಕ ಖಾತೆಗೆ 100/- ರೂಪಾಯಿ ಹಣ ಜಮಾ ಮಾಡಬೇಕು.(ನಮ್ಮ ವೆಬ್ ಸೈಟ್ www.aimyug.com )
ಸ್ಕಾಲರ್ ಶಿಪ್ ಪಡೆದ ವಿದ್ಯಾರ್ಥಿಗಳ ಬ್ಯಾಂಕ ಖಾತೆಗೆ ಹಣ ಜಮಾ ಮಾಡಲಾಗುವುದು.
ಪ್ರಾಯೋಜಕರ ತೀರ್ಮಾನವು ಅಂತಿಮವಾಗಿರುತ್ತದೆ.
ಪರಿಕ್ಷೆಯ ನಿಯಮಾವಳಿಗಣನ್ನು ಬದಲಾಯಿಸುವ ಹಕ್ಕು ಪ್ರಾಯೋಜಕರಿಗೆ ಇರುತ್ತದೆ.
ಪರೀಕ್ಷೆಯ ಫಲಿತಾಂಶವನ್ನು www.aimyug.com ನಲ್ಲಿ ವೀಕ್ಷಿಸಬಹುದು.
ವಿಷಯಕ್ಕೆ ಸಂಬಂಧಪಟ್ಟ ಪುಸ್ತಕವನ್ನು ಉಚಿತವಾಗಿ ನೀಡಲಾಗುವುದು.
ಲಿಖಿತ ಪರೀಕ್ಷೆಯಾಗಿದ್ದು 3 ಗಂಟೆಯ ಅವಧಿಯನ್ನು ಹೊಂದಿರುತ್ತದೆ.
ಪರೀಕ್ಷಾ ದಿನಾಂಕ ಸಪ್ಟಂಬರ್ 25 -2016
ಫಲಿತಾಂಶದ ದಿನಾಂಕ ನವಂಬರ್ 01-2016
ಸನ್ಮಾನ ಸಮಾರಂಭ ಮತ್ತು ಪ್ರಮಾಣ ಪತ್ರ ವಿತರಣೆ. ನವಂಬರ್ 27-2016
ವಿಳಾಸ:ಏಷಿಯನ್ ಇನಸ್ಟಿಟ್ಯೂಟ್ ಆಫ್ ಮಿಡ್ ಬ್ರೇನ್,ವಲ್ಲಭಭಾಯಿ ಸರ್ಕಲ್,ಹಳೆ ಹಳಕಟ್ಟಿ ಆಸ್ಪತ್ರೆ ಮೇಲೆ,
ಬಾಗಲಕೋಟೆ-587101.ಮೋ:7259746168
ಜನರಿಂದ ಕೇಳಲ್ಪಟ್ಟ ಪ್ರಶ್ನೆಗಳು
1) ಮಿಡ್ ಬ್ರೇನ್ ಆಕ್ಟಿವೇಶನ್ ನಿಂದ ಸೈಡ್ ಎಫೆಕ್ಟ ಏನಾದರೂ ಇದೆಯಾ?
ಇಲ್ಲ,ಮಿಡ್ ಬ್ರೇನ್ ಆಕ್ಟಿವೇಶನ್ ನಿಂದ ಯಾವುದೇ ರೀತಿಯ ಸೈಡ್ ಎಫೆಕ್ಟ ಇರುವುದಿಲ್ಲ.ಕಾರಣ ಇಲ್ಲಿ ಯಾವುದೇ ರೀತಿಯ ಔಷಧಿ ಕೊಡುವುದಿಲ್ಲ,ಆಪರೇಶನ್ ಮತ್ತು ಇಂಜಕ್ಷನ್ನು ಕೊಡುವುದಿಲ್ಲ.
ಸಾವಿರಾರು ವರ್ಷಗಳಿಂದ ಇಡಿ ವಿಶ್ವವೇ ಪಾಲಿಸುತ್ತಿರುವ ಯೋಗ,ಪ್ರಾಣಾಯಾಮ,ಧ್ಯಾನ ಇವುಗಳ ಜೊತೆಗೆ ಸಂಗೀತವನ್ನು ಬಳಸಲಾಗುತ್ತದೆ.
2)ಕೆಲವು ದಿನ ಅಥವಾ ವರ್ಷಗಳ ನಂತರ ಮಿಡ್ ಬ್ರೇನ್ನ ಶಕ್ತಿ ಹೊರಟು ಹೋಗುತ್ತದೆಯೇ?
ಇಲ್ಲ,ಒಂದು ಸಲ ಮಿಡ್ ಬ್ರೇನ್ ತನ್ನ ಕಾರ್ಯವನ್ನು ನಿರ್ವಹಿಸಲು ಆರಂಭಿಸಿದರೆ,ಅದು ಜೀವನ ಪರ್ಯಂತ ಕಾರ್ಯ ನಿರ್ವಹಿಸುತ್ತಲೇ ಇರುತ್ತದೆ.ವಯಸ್ಸು ಹೆಚ್ಚಿದಂತೆ ಮೆದುಳಿನ ಸಾಮಥ್ರ್ಯವೂ ಹೆಚ್ಚಿ,ಮೆದುಳು ಹೆಚ್ಚಿನ ಕಾರ್ಯ ಕ್ಷಮತೆಯನ್ನು ತೊರಿಸುತ್ತದೆ.
3)ಮಿಡ್ ಬ್ರೇನ್ ನಮಗೆ ಹುಟ್ಟಿನಿಂದ ಇರುತ್ತದೆಯೇ?
ಹೌದು,ಮಿಡ್ ಬ್ರೇನ್ ಹುಟ್ಟಿನಿಂದ ನಮ್ಮಲ್ಲಿ ಇದ್ದರೂ ಇದು ಎಲ್ಲರಲ್ಲಿಯೂ ಕ್ರೀಯಾಶೀಲವಾಗಿರುವುದಿಲ್ಲ.ಆದರೆ ಇದನ್ನು ಕ್ರೀಯಾಶೀಲ ಗೊಳಿಸಿಕೊಂಡು ಶಬ್ದ,ಸ್ಪರ್ಷ,ವಾಸನೆ ಇತ್ಯಾದಿಗಳ ಸಾಮರ್ಥ ಹೆಚ್ಚುತ್ತದೆ.
ನೀವು ಮಿಡ್ ಬ್ರೇನ್ ಬ್ರಾಂಚ ತೆಗೆದುಕೊಳ್ಳಲು ಇಚ್ಚಿಸುತ್ತಿದ್ದೀರಾ?
• ನಿಮ್ಮ ಬಾಸ್ ನೀವೇ ಆಗಿರುತ್ತೀರಿ.
• ಜೀವನ ಪರ್ಯಂತ ನಮ್ಮ ಸಹಾಯ ಮತ್ತು ಸಹಕಾರ ಇರುತ್ತದೆ.
• ಶಿಕ್ಷಣ ಮತ್ತು ಮಕ್ಕಳನ್ನು ದೇಶದ ಆಸ್ತಿಯನ್ನಾಗಿಸುವ ಗೌರವಯುತವಾದ ಸ್ವಯಂ ಉದ್ಯೋಗ.
• ಕೋರ್ಸ ಸಾಮಗ್ರಿಗಳನ್ನು ನಾವೇ ಕೊಡುತ್ತೇವೆ.
• ವಾರದಲ್ಲಿ ಒಂದು ದಿನ ಮಾತ್ರ ಕೆಲಸ
• ಹಣವನ್ನು ಗಳಿಸುವ ಸುಲಭ ಅವಕಾಶ.
• ಕಮ್ಮಿ ಹಣದಲ್ಲಿ ಹೆಚ್ಚು ಹಣ ಗಳಿಸುವ ಅವಕಾಶ.
• ಬೇರೆಯವರು ನಿಮ್ಮ ಊರಲ್ಲಿ ಆರಂಭಿಸುವ ಮೊದಲು ಆರಂಭಿಸಿರಿ.
ಕೂಡಲೆ ನಮ್ಮನ್ನು ಸಂಪರ್ಕಿಸಿ
